ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಕಾವ್ಯ ಪ್ರಕಾರದಲ್ಲಿ ಡಾ. ದೊಡ್ಡರಂಗೇಗೌಡರದು ತ್ರಿವಿಕ್ರಮ ಸಾಧನೆ. ಅವರ ಕಾವ್ಯೋದ್ಯಾನದಲ್ಲಿ ಅರಳಿದ ಸುಂದರ ಸುಮಧುರ ಕಾವ್ಯ ಕುಸುಮಗಳಿಗಳು ನೂರಾರು, ಸಾವಿರಾರು. ಅವುಗಳಲ್ಲಿ ಅವುಗಳದೇ ಆದ ಕಂಪಿದೆ, ಇಂಪಿದೆ, ಚೆಲುವಿದೆ, ಮಧುವಿದೆ, ಮಾಧುರ್ಯವೂ ಇದೆ. ಅವರ ಸಾಹಿತ್ಯ ಸೃಜನ ಎಂದೂ ಬತ್ತದ ಒರತೆ. ಬಾಡದ ವಸಂತ ಪಲ್ಲವ. ಅವರ ಸೌಜನ್ಯ ನಡೆ ನುಡಿ, ಅವರ ಸರಳತೆ, ಅವರ ಮಗು ಮುಗ್ಧಭಾವ, ಅವರ ಸ್ನೇಹಪರತೆ, ಅವರ ಹೃದಯ ಶ್ರೀಮಂತಿಕೆ ಅವರನ್ನು ಎತ್ತರಕ್ಕೇರಿಸಿವೆ.
ನಾಡಿನ ಇಂಥ ಒಬ್ಬ ಪ್ರತಿಭಾವಂತ ಹಿರಿಯ ಸಾಹಿತಿಗಳಾದ ದೊಡ್ಡರಂಗೇಗೌಡರ ‘ಪ್ರಗಾಥ ಪ್ರತಿಭೆ‘ ಎಂಬ ಅಪರೂಪದ ಒಂದು ವಿಶಿಷ್ಟವಾದ ವಿಮರ್ಶಾ ಕೃತಿಯನ್ನು ನಮ್ಮ ಪ್ರಕಾಶನದ ಮೂಲಕ ಪ್ರಕಟಿಸಲು ನಮಗೆ ಹೆಮ್ಮೆ ಎನಿಸಿದೆ. ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವ ಮಾನ್ಯ ಡಾ. ದೊಡ್ಡರಂಗೇಗೌಡರಿಗೂ ಹಾಗೂ ಕೃತಿಯ ಸಂಪಾದಕರಾದ ಬೇಡರೆಡ್ಡಿ ಪಂಪಣ್ಣ ಅವರಿಗೂ ನಮ್ಮ ಅನಂತ ಧನ್ಯವಾದಗಳು.
– ರಾಮಕೃಷ್ಣ (ಪ್ರಕಾಶಕ)
Leave a Reply
You must be logged in to post a comment.