1977 ರಿಂದಲೂ ದೊಡ್ಡರಂಗೇಗೌಡರು ಐದು ನೂರಕ್ಕೂ ಹೆಚ್ಚು ಕನ್ನಡ ಚಿತ್ರಗೀತೆಗಳನ್ನು ರಚಿಸಿ ಜನಮಾನಸ ಗೆದ್ದು ಕನ್ನಡ ಚಿತ್ರ ರಸಿಕರ ಪ್ರೀತಿಯ ಕವಿಯಾಗಿದ್ದಾರೆ. ಹತ್ತು ಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. 70 ಕ್ಕೂ ಮಿಕ್ಕು ಧ್ವನಿ ಸುರುಳಿಗಳು ಪ್ರಕಟವಾಗಿ ಜನಪ್ರಿಯತೆಯ ಔನ್ನತ್ಯ ಪಡೆದಿವೆ. ನೂರಕ್ಕೂ ಹೆಚ್ಚು ದೂರದರ್ಶನ ಧಾರಾವಾಹಿಗಳಿಗೆ ಶೀರ್ಷಿಕೆ ಸಾಹಿತ್ಯ ಗೀತೆಗಳನ್ನು ರಚಿಸಿದ್ದಾರೆ.

ಡಾ. ದೊಡ್ಡರಂಗೇಗೌಡರ ಗೀತೆಗಳಿಗಿರುವ ಕೆಲವು ಕನ್ನಡ ಚಿತ್ರಗಳು :

ಪಡುವಾರ ಹಳ್ಳಿ ಪಾಂಡವರು
ಪರಸಂಗದ ಗೆಂಡೇತಿಮ್ಮ
ಬಂಗಾರದ ಜಿಂಕೆ
ಅಶ್ವಮೇಧ
ರಂಜಿತಾ
ರಶ್ಮಿ
ಪ್ರೇಮಪರ್ವ
ಕೃಷ್ಣ ರುಕ್ಮಿಣಿ
ಹೊಸನೀರು
ಒಲವೇ ಬದುಕು
ಆಲೆಮನೆ
ಗಣೇಶನ ಮದುವೆ
ಕಾವ್ಯ
ಜನುಮದ ಜೋಡಿ

ಹೀಗೆ ಇನ್ನೂ ಮುಂತಾದ ಚಿತ್ರಗಳಿಗೆ ಎಂದೂ ಮರೆಯಲಾಗದ ಗೀತೆಗಳನ್ನು ಬರೆದಿದ್ದಾರೆ.

ಇವರ ಗೀತೆಗಳಲ್ಲಿ ಸಾಹಿತ್ಯದ ಜೊತೆ ಭಾವಾತ್ಮಕ, ಸಂಗೀತ ಮತ್ತು ಕಲಾತ್ಮಕತೆ ಮನೆ ಮಾಡಿರುತ್ತದೆ. ಇವರ ಸಾಹಿತ್ಯಕ್ಕೆ ಕನ್ನಡ ಪತ್ರಿಕಾ ಲೋಕ ಮುಕ್ತ ಪ್ರಶಂಸೆ ಮಾಡಿದೆ. ಇದುವರೆಗೂ ಗೌಡರ 50 ಕ್ಕೂ ಹೆಚ್ಚು ಭಾವಗೀತೆಗಳ ಧ್ವನಿಸುರುಳಿಗಳು ಹೊರ ಬಂದಿವೆ. 30 ಕ್ಕೂ ಅಧಿಕ ಭಕ್ತಿಗೀತೆಗಳ ಧ್ವನಿಸುರುಳಿಗಳೂ ಬಂದಿವೆ. ಮಾವು-ಬೇವು ಧ್ವನಿಸುರುಳಿ ಮನೆ ಮಾತಾಗಿದೆ. ಇದು ವಿದೇಶಗಳ ಕನ್ನಡಿಗರಿಗೂ ಇಷ್ಟವಾಗಿದ್ದು ಅಲ್ಲೂ ಕನ್ನಡಿಗರ ಮನೆ ಮಾತಾಗಿದೆ.