IMG_20140623_0005ಅನಾದಿ ಕಾಲದಿಂದಲೂ ಕಾವ್ಯ ಜಗತ್ತಿನಲ್ಲಿ ಸುದೀರ್ಘವಾಗಿ, ಸರಿತೆಯಾಗಿ ಹರಿವ ಜನಪದ ಗೀತೆಗಳು ಸಮೃದ್ಧವಾಗಿವೆ. ಅನಂತರದಲ್ಲಿ ಅವುಗಳಿಂದ ಸ್ಫೂರ್ತಿ ಪಡೆದ ಮಹಾ ಕಾವ್ಯಗಳು ಮೂಡಿ ಬಂದಿವೆ; ಇತ್ತೀಚಿಗೆ ಅಂಥ ಬರಹಗಳೇ ಅಪರೂಪವಾಗುತ್ತಿವೆ.
ಈ ಆಧುನಿಕ ಕಾಲದಲ್ಲೂ “ನೀಳ್ಗೀತೆಗಳ”ನ್ನು ಸಮೃದ್ಧವಾಗಿ ಬರೆಯುತ್ತಾ ಬಂದ ಕವಿಗಳಲ್ಲಿ ನಮ್ಮ ಪ್ರೀತಿಯ ಪ್ರೊಫೆಸರ‍್ ದೊಡ್ಡರಂಗೇಗೌಡರೂ ಒಬ್ಬರು.
ಅರವತ್ತನೇ ಇಸವಿಯಲ್ಲೇ ’ಮೂರ್ತಿ ತಂದಿತ್ತು ಕೀರ್ತಿ’ ಎಂಬ ನೀಳ್ಗೀತೆಯಿಂದ ಪ್ರಸಿದ್ಧಿಗೆ ಬಂದ ಡಾ|| ದೊಡ್ಡರಂಗೇ ಗೌಡರ ಇತ್ತೀಚಿನ ’ಸಾಲ್ಮರದ ನೀಳ್ಗೀತೆ’ವರೆಗೆ ಅವರು ಅಸಂಖ್ಯ ’ಪ್ರಗಾಥ’ಗಳನ್ನು ಬರೆದಿದ್ದಾರೆ.
ಅವುಗಳಲ್ಲಿ ಕೆಲವನ್ನು ಈ ಪುಸ್ತಕದಲ್ಲಿ ಪರಿಚಯಿಸಿ ಸಹೃದಯರ ಕೈಗೆ ಕೊಡಲಾಗಿದೆ.

ಬೀರೇಶ್ವರ ಪ್ರಕಾಶನ, ಮಧುಗಿರಿ :

M: 99645 56171