ಚಟುವಟಿಕೆಯ ಚಿಲುಮೆಯಾಗಿ ಬೆಳೆದ ಕೆ. ರಾಜೇಶ್ವರಿ ಗೌಡ ಅವರು ಉತ್ತಮ ಅಧ್ಯಾಪಕಿಯಾಗಿ, ವಾಕ್ಪಟುತ್ವದ ವ್ಯಕ್ತಿಯಾಗಿ, ಸಾಹಿತಿಯಾಗಿ, ಕವಿಯಾಗಿ, ಪ್ರವಾಸ ಕಥನಗಾರ್ತಿಯಾಗಿ… ಸಾಹಿತ್ಯ ವಲಯದಲ್ಲಿ ತಮ್ಮನ್ನು ದಾಖಲಿಸಿಕೊಂಡಿದ್ದಾರೆ.
ಮನುಜ ಪ್ರೀತಿಯ ನೆಲೆಯಲ್ಲಿ, ಹೆಣ್ಣಿನ ಅಂತರಂಗದ ತುಡಿತದಲ್ಲಿ ಅರಳಿರುವ ಅವರ ಕವನಗಳು ನಿರಾಡಂಬರ, ಸರಳ, ಸುಂದರ.
ಕಾಲದ ಅಂತರದಲ್ಲಿ ಕಡೆದು ನಿಲ್ಲಿಸುವ ಅವರ ನುಡಿ-ಚಿತ್ರಗಳು ವಿಸ್ಮಯ ಮೂಡಿಸುತ್ತವೆ. ಅವರ ದಟ್ಟು ಅನುಭವದ ಅಭಿವ್ಯಕ್ತಿ ಪರಿಣಾಮಕಾರಿಯಾಗಿದೆ.
‘ಭಾವಬುತ್ತಿ‘ಯಲ್ಲಿನ ಕವನಗಳು ಸ್ತ್ರೀಕೇಂದ್ರಿತ ನೆಲೆಯಲ್ಲಿಯೇ ಹೆಚ್ಚಾಗಿ ವಿಹರಿಸುತ್ತವೆ. ಜಗತ್ತಿನ ಅನೇಕ ವಿಸ್ಮಯದ ಸಂಗತಿಗಳನ್ನು ಇಲ್ಲಿನ ಕವನಗಳು ಧ್ವನಿಸುತ್ತವೆ.
– ಡಾ. ಕಮಲ ಹಂಪನ
Leave a Reply
You must be logged in to post a comment.