1. ಹೂ ಈಸ್ ಹೂ? ನಲ್ಲಿ ಇವರ ಬಗ್ಗೆ ದಾಖಲೆಗಳು ಅಚ್ಚಾಗಿವೆ.

2. ಏಷಿಯಾ – ಪೆಸಿಫಿಕ್ನಲ್ಲಿ ಇವರ ಸಾಧನೆಗಳ ಉಲ್ಲೇಖವಾಗಿದೆ.

3. ಹಿರಿಯ ಆಂಗ್ಲ ಪ್ರಾಧ್ಯಾಪಕ ಪ್ರೊ. ಎನ್. ನಂಜುಂಡ ಶಾಸ್ತ್ರಿ ಅವರು ದಿ ಅಪ್‌ಕಮಿಂಗ್ ಮಾರ್ಡರ್ನ್ ಕನ್ನಡ ಪೊಯೆಟ್ ; ದೊಡ್ಡರಂಗೇಗೌಡ ಎಂಬ ಸುದೀರ್ಘ ಲೇಖನ ಬರೆದು ಪ್ರಕಟಿಸಿದ್ದಾರೆ.

4. ಇವರ 47 ಕನ್ನಡ ಕವಿತೆಗಳು ಹಿಂದಿ ಭಾಷೆಗೆ ಅನುವಾದಿತಗೊಂಡಿವೆ. ಗೀತ್ ವೈಭವ್ ಎನ್ನುವ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಮುದ್ರಣಗೊಂಡಿವೆ.

5. 1977 ರಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯಲ್ಲಿ ನಡೆದ ಸರ್ವಭಾಷಾ ಕವಿಗೋಷ್ಠಿಯಲ್ಲಿ ಶ್ರೀಯುತರು ಕನ್ನಡ ನಾಡನ್ನು ಪ್ರತಿನಿಧಿಸಿ ಕವಿತೆ ವಾಚಿಸಿದ್ದಾರೆ.