Authoradmin

ಪ್ರೀತಿ ಪ್ರಗಾಥ

IMG_20140623_0013ಒಂದೇ ವಸ್ತುವಿನ ವಿವಿಧ ಆಯಾಮಗಳನ್ನು ಕಾಣಿಸಿ ಕೊಡುವ ನೀಳ್ಗವಿತೆಗೆ ಇಂಗ್ಲೀಷ್‌ನಲ್ಲಿ ‘ಓಡ್‘ ಎನ್ನುತ್ತಾರೆ. ಇದು ಕನ್ನಡದಲ್ಲಿ ‘ಪ್ರಗಾಥ‘ ಎಂಬ ಹೆಸರಿನಲ್ಲಿ ಜ್ನಮ ತಾಳಿ ದಶಕಗಳೇ ಸಂದಿವೆ.
ನಮ್ಮ ಹಿರಿಯ ಕವಿಗಳನೇಕರು ಪ್ರಗಾಥದ ರಚನೆಯನ್ನು ಪ್ರಯೋಗದ ನೆಲೆಯಲ್ಲಿ ಮಾಡಿ ತೋರಿಸಿದ್ದರು. ಹಾಗೆ ಅವರು ಸೃಜಿಸಿದ್ದು ಕೇವಲ ಬೆರಳೆಣಿಕೆಯಲ್ಲಷ್ಟೇ. ಆದರೆ ಈಗಾಗಲೇ ವೈವಿಧ್ಯಮಯ ಕವಿತೆಗಳ ಸೃಷ್ಟಿಯಲ್ಲಿ ದೊಡ್ಡ ಹೆಸರು ಮಾಡಿರುವ ಜನಪ್ರಿಯ ಕವಿ ಡಾ. ದೊಡ್ಡರಂಗೇಗೌಡರು ಈ ಕಾವ್ಯ ಪ್ರಕಾರದಲ್ಲಿ ವಿಶ್ವಮಟ್ಟದ ದಾಖಲೆಯನ್ನು ಸೃಷ್ಟಿಸಿದ್ದಾರೆ.
ವಿಶ್ವದಾಖಲೆಗಳನ್ನು ಗುರುತಿಸಿರುವ ಇಂಗ್ಲೆಂಡ್‌ನ ‘ರೆಕಾರ್ಡ್‌ ಹೋಲ್ಡರ್ಸ್‌ ರಿಪಬ್ಲಿಕ್‌‘ ಸಂಸ್ಥೆಯ ಮನ್ನಣೆಗೆ ಕವಿ ಡಾ. ದೊಡ್ಡರಂಗೇಗೌಡರು ಪಾತ್ರರಾಗಿದ್ದಾರೆ.
ಅಂತಹ ಪ್ರಗಾಥಗಳ ಒಂದು ಸಂಕಲನವೇ ಈ ‘ಪ್ರೀತಿ ಪ್ರಗಾಥ‘

– ಮಹಾಬಲ ಸೀತಾಳಭಾವಿ
ಪತ್ರಕರ್ತರು (ತರಂಗ ವಾರಪತ್ರಿಕೆ)

ಕಾವ್ಯ ಕಾಸಾರ

IMG_20140623_0007ಕವಿತೆ ಈ ಹೊತ್ತು ಯಾರಿಗೂ ಬೇಕಾಗಿಲ್ಲ. ಆದರೂ ನಾವು ನಮ್ಮ ಅಭಿಜಾತ ಪ್ರಕಾಶನದ ಚೊಚ್ಚಲ ಕೃತಿಯಾಗಿ ಜನಪ್ರಿಯ ಕವಿ ಡಾ. ದೊಡ್ಡರಂಗೇಗೌಡರ ಕವನ ಸಂಕಲನ ‘ಕಾವ್ಯ ಕಾಸಾರ‘ವನ್ನು ಬೆಳಕಿಗೆ ತರುತ್ತಿದ್ದೇವೆ.
ಕಾರಣ ಇಷ್ಟೇ, ಪರಿಚಿತ ಸಾಹಿತ್ಯ ವಲಯಗಳಲ್ಲಿ ದೊ.ರಂ.ಗೌಡರು ಸರಳರು, ಸಜ್ಜನರು, ಸಾಮಾನ್ಯರ ಜೊತೆ ಬೆರೆಯುವ ಸಾಹಿತಿಗಳು. ಯಾವ ಪೋಜೂ ಇಲ್ಲ.ಎಲ್ಲರನ್ನೂ ಸಮಾನತೆಯಿಂದ ಕಾಣುವ ಜನಪರ ಕವಿಗಳು.
ಭಾವನೆಗಳು, ಶುದ್ದ ಅಭಿವ್ಯಕ್ತಿ, ಸರಳ, ಗೀತೆಗಳನ್ನು ಎಲ್ಲರೂ ಹಾಡಿಕೊಳ್ಳಬಹುದು. ದೊ.ರಂ.ಗೌಡರ ಕವಿತೆ ಓದುವುದೆಂದರೆ ಜಗತ್ತನ್ನೇ ಸುತ್ತಿ ಬಂದ ಹಾಗೆ.

– ಅಭಿಜಾತ ಪ್ರಕಾಶನ

ಗೀತ ಗಾರುಡಿ

IMG_20140623_0006

ನಾನು ಪದ್ಯಗಳನ್ನು ಬರೆಯಲು ಪ್ರಾರಂಭಿಸಿದ ಕಾಲದಲ್ಲಿ ನವ್ಯ ಕಾವ್ಯ ಉತ್ಕರ್ಷದಲ್ಲಿತ್ತು. ಭಾವಗೀತೆಗಳನ್ನು ಕೇಳುವವರು ವಿರಳವಾಗಿದ್ದರು. ಆಗ ಅವುಗಳಿಗೆ ಅಂಥ ವಿಶೇಷ ಚಲಾವಣೆ ಇಲ್ಲದಿದ್ದರೂ ಸಹ ಗೀತ ಗುಂಗು ನನ್ನನ್ನು ಬಿಡಲಿಲ್ಲ. ನನಗೆ ಅನ್ನಿಸಿದ್ದನ್ನೆಲ್ಲಾ ನಾನು ಬರೆಯುತ್ತಲೇ ಬಂದೆ.

ನನ್ನ ಬರವಣೀಗೆಗೆ ಕನ್ನಡ ನವೋದಯ ಪರಂಪರೆಯ ಹಿರಿಯ ಕವಿಗಳ ಅತ್ಯುತ್ತಮ ಭಾವಗೀತೆಗಳೇ ಪ್ರೇರಣೆ. ಈ ಕೃತಿ ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ ಆ ಮಹಾನ್ ಚೇತನಗಳನ್ನು ಮನಸಾರೆ ಸ್ಮರಿಸುತ್ತೇನೆ. Continue reading

Kannada word “Ooralli” used by Alexander the Great?

The Hindu today reports Mr. Doddarange Gowda, MLC, finding a Kannada word on a wall in Egypt:

Speaking after inaugurating the Kannada Rajyotsava celebrations organised by Karnataka State Pollution Control Board (KSPCB) here on Thursday, Mr. Gowda said he had personally seen the Kannada word “Ooralli” (which means in a village) written on a huge wall constructed in Alexandria by ancient Greek ruler Alexander the Great in third century BC.

“The Kannada word ‘Ooralli’ is part of the remnants of 36,000 palm manuscripts that had been burnt in an accidental fire during Alexander’s time.

When the accidental fire destroyed much of the palm manuscripts, Alexander ordered his commanders to erect a huge wall so that the remnants can be magnified and reproduced on it. The palm manuscripts contained texts written not only in Greek, Latin and Hebrew, but also Sanskrit and Kannada. This proves that Kannada was in existence even in second century BC”, Mr. Gowda claimed.

ಭಾವ ಭಾಸ್ಕರ

ದೊಡ್ಡರಂಗೇಗೌಡರ ಸಾಮಾಜಿಕ ಪ್ರಜ್ಞೆ

IMG_20140623_0011ಆಧುನಿಕ ಕನ್ನಡ ಕಾವ್ಯಕ್ಷೇತ್ರದಲ್ಲಿ ಡಾ. ದೊಡ್ಡರಂಗೇಗೌಡರದು ದೊಡ್ಡ ಹೆಸರು. ಇವರೊಬ್ಬ ಅಸಾಧಾರಣ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ಗೌಡರು ಅತ್ಯಂತ ಜನಪ್ರಿತಯ ಕವಿ ಎಂಬುದು ವಿಶೇಷ. ಕಾವ್ಯ ಕ್ಷೇತ್ರವನ್ನೇ ನಿರ್ದಿಷ್ಟವಾಗಿ ಇಟ್ಟುಕೊಂಡು ಹೋಗುವುದಾದರೆ ಗೌಡರಂಥ ಇನ್ನೊಬ್ಬ ಕವಿ ಕನ್ನಡದಲ್ಲಿ ಇಲ್ಲವೇ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. Continue reading