Authoradmin

ಅಭಿವ್ಯಕ್ತಿ

IMG_20140623_0012‘ಅನಂತ ಪ್ರಗತಿ ಎಂಟರ್‌ಪ್ರೈಸಸ್‌‘ ಕೈಗೆತ್ತಿಕೊಂಡಿರುವ ಕಾರ್ಯ ಚಟುವಟಿಕೆಗಳಲ್ಲಿ ಪುಸ್ತಕ ಪ್ರಕಟಣೆಯೂ ಒಂದು. ಪುಸ್ತಕ ಸಂಸ್ಕೃತಿ ನಮ್ಮ ಭಾಷೆ, ಸಾಹಿತ್ಯಗಳ ಮೂಲಕ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಚೈತನ್ಯ ಶಕ್ತಿ. ಆ ಚೈತನ್ಯಶಕ್ತಿಯನ್ನು ಜೀವಂತವಾಗಿಡುವ ಉದ್ದೇಶದಿಂದಲೇ ನಾವು ವಸ್ತು ವಿಷಯಗಳಲ್ಲಿ ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ.
ಪಾಶ್ಚತ್ಯ ವಿಮರ್ಶೆಯ ಮಾನದಂಡಗಳಿಗಿಂತಾ ನಮ್ಮ ನಾಡಿನ ಬೇರುಗಳಾದ ‘ಭಾರತೀಯ ಕಾವ್ಯ ಮೀಮಾಂಸೆ‘ ಹಾಗೂ ‘ಸಹೃದಯದ ತತ್ವ‘ವೇ ದೇಸಿ ಸಾಹಿತ್ಯ ಸೃಜನೆಗಳನ್ನು ಅಳೆಯುವ ಸರಿಯಾದ ಅಳತೆಗೋಲುಗಳು ಎಂದು ಪ್ರಖರವಾಗಿ ನಂಬಿರುವವರು ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ದೊಡ್ಡರಂಗೇ ಗೌಡರು.
ಇಲ್ಲಿ ಕೃತಿಯ ರಸಸ್ವಾದವೇ ಮುಖ್ಯ. ರಸಾನಂದವನ್ನು ಅನುಭವಿಸಿದ ಸಹೃದಯ ಯಾವ ಯಾವ ಕಾರಣಗಳಿಂದ ಕೃತಿ ತನ್ನ ಮನೋಮಂಡಲದ ಮೇಲೆ ಪ್ರಭಾವ ಬೀರಿತು ಎಂಬ ವಾಸ್ತವಾಂಶಗಳಿಗೆ ಸಮರ್ಥ ಅಭಿವ್ಯಕ್ತಿಯನ್ನು ನೀಡಿದ್ದಾರೆ ಇಲ್ಲಿನ ಲೇಖನಗಳಲ್ಲಿ.
ಹೀಗಾಗಿ ಅಭಿವ್ಯಕ್ತಿಯ ಹಿಂದಿನ ರಸಾನುಭವಗಳನ್ನು ಕಟ್ಟಿ ಕೊಡುವ ಬರಹಗಳು ಇಲ್ಲಿ ಸಂಕಲಿತವಾಗಿರುವುದರಿಂದ ಕೃತಿಯ ಆಂತರ್ಯ ಓದುಗರಿಗೆ ಹೊಸ ಅನುಭವದ ಮುದವನ್ನು ನೀಡುತ್ತದೆ. ತನ್ಮೂಲಕ ರಸಾನಂದವೇ ಇಲ್ಲಿನ ಗುರಿಯಾಗಿದೆ.

– ಡಾ. ಟಿ.ಎಸ್. ವಿಶ್ವನಾಥ್

ಭಾವಬುತ್ತಿ

IMG_20140623_0001
ಚಟುವಟಿಕೆಯ ಚಿಲುಮೆಯಾಗಿ ಬೆಳೆದ ಕೆ. ರಾಜೇಶ್ವರಿ ಗೌಡ ಅವರು ಉತ್ತಮ ಅಧ್ಯಾಪಕಿಯಾಗಿ, ವಾಕ್ಪಟುತ್ವದ ವ್ಯಕ್ತಿಯಾಗಿ, ಸಾಹಿತಿಯಾಗಿ, ಕವಿಯಾಗಿ, ಪ್ರವಾಸ ಕಥನಗಾರ್ತಿಯಾಗಿ… ಸಾಹಿತ್ಯ ವಲಯದಲ್ಲಿ ತಮ್ಮನ್ನು ದಾಖಲಿಸಿಕೊಂಡಿದ್ದಾರೆ.
ಮನುಜ ಪ್ರೀತಿಯ ನೆಲೆಯಲ್ಲಿ, ಹೆಣ್ಣಿನ ಅಂತರಂಗದ ತುಡಿತದಲ್ಲಿ ಅರಳಿರುವ ಅವರ ಕವನಗಳು ನಿರಾಡಂಬರ, ಸರಳ, ಸುಂದರ.
ಕಾಲದ ಅಂತರದಲ್ಲಿ ಕಡೆದು ನಿಲ್ಲಿಸುವ ಅವರ ನುಡಿ-ಚಿತ್ರಗಳು ವಿಸ್ಮಯ ಮೂಡಿಸುತ್ತವೆ. ಅವರ ದಟ್ಟು ಅನುಭವದ ಅಭಿವ್ಯಕ್ತಿ ಪರಿಣಾಮಕಾರಿಯಾಗಿದೆ.
‘ಭಾವಬುತ್ತಿ‘ಯಲ್ಲಿನ ಕವನಗಳು ಸ್ತ್ರೀಕೇಂದ್ರಿತ ನೆಲೆಯಲ್ಲಿಯೇ ಹೆಚ್ಚಾಗಿ ವಿಹರಿಸುತ್ತವೆ. ಜಗತ್ತಿನ ಅನೇಕ ವಿಸ್ಮಯದ ಸಂಗತಿಗಳನ್ನು ಇಲ್ಲಿನ ಕವನಗಳು ಧ್ವನಿಸುತ್ತವೆ.

– ಡಾ. ಕಮಲ ಹಂಪನ

ನಮ್ಮೂರ ಮಂದಾರ ಹೂವೆ

ಚಿತ್ರ: ಆಲೆಮನೆ
ನಟರು: ಸುರೇಶ ಹೆಬ್ಳಿಕರ್, ರೂಪ ಚಕ್ರವರ್ತಿ
ಗಾಯನ: ಎಸ್ ಪಿ ಬಾಲು

ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು
ಕಣ್ಣಲ್ಲೇ ಕರೆದು ಹೊಂಗನಸ ತೆರೆದು ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ, ಸೊಗಸಾದ ಕಾರಂಜಿ ಬಿರಿದೆ…….
ಒಡಲಾಳ ಮೊರೆದು ಒಡನಾಟ ಮೆರೆದು ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸಗಾನ ತೋರಿ ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ ಇನಿದಾದ ಆನಂದ ತಂದೆ, ಇನಿದಾದ ಆನಂದ ತಂದೆ….

ಭೂಮಿ ತಾಯಾಣೆ ನೀ ಇಷ್ಟ ಕಣೆ

ಚಿತ್ರ : ಪ್ರಾಯ ಪ್ರಾಯ ಪ್ರಾಯ (೧೯೮೨)
ಸಂಗೀತ : ಉಪೇಂದ್ರಕುಮಾರ್
ಗಾಯನ : ಜಯಚಂದ್ರನ್ ಮತ್ತು ವಾಣಿ ಜಯರಾಮ್
ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೇ ಚೂಟಿ…..ಹೇ ನಾಟಿ……
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ನೀ ಚೂಟಿ……ನೀ ಘಾಟಿ……
ಗಂಡು : ಪೇಟೆ ಹೆಣ್ಣ ಬಣ್ಣ ಕಂಡೆ ಕೊಂಚ ದಂಗಾಗಿ ನಾ ದೂರ ನಿಂತೆ
ತುಂಟಿ ನೀನು ಅಂಟಿಕೊಂಡೆ ಪ್ರೀತಿ ನಂಟಾಗಿ ಸಲ್ಲಾಪ ತಂದೆ
ಹೆಣ್ಣು : ಕೊಂಕು ಮಾತು ನನ್ನ ಸೋಕಿ ಮೋಹ ಮಿಂಚಾಗಿ ಮೈಯೆಲ್ಲ ಬೆಂಕಿ
ಮೋಡಿ ಮಾಡಿ ಕಾಡಿ ಬೇಡಿ ಹೊಂದಿ ಈ ಸ್ನೇಹ ಹಣ್ಣಯ್ತು ಕೂಡಿ
ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಗಂಡು : ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೆಣ್ಣು : ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ಗಂಡು : ಕಣ್ಣ ನೋಟ ಆಸೆ ತಂದೆ ನಿನ್ನ ಸಹವಾಸ ಹಾಲ್ಜೇನಿನಂತೆ
ನನ್ನ ನೀನು ನಿನ್ನ ನಾನು ನಂಬಿ ಬೆರೆಯೋಣ ಹೂದುಂಬಿಯಂತೆ
ಹೆಣ್ಣು : ನಿನ್ನ ನಾಳೆ ಎಲ್ಲಾ ಸೇರಿ ರಂಗು ರಂಗಾಗಿ ಬೆರೆಯೋಣ ಸೇರಿ
ಎಲ್ಲಿ ನೀನೋ ಅಲ್ಲಿ ನಾನೋ ಎಂದೂ ಒಂದಾಗಿ ಸಾಗೋಣ ದಾರಿ
ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಗಂಡು : ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೆಣ್ಣು : ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ಹೇ ಚೂಟಿ…..
ಗಂಡು : ನೀ ಘಾಟಿ…..

ಒಲುಮೆ ಸಿರಿಯಾ ಕಂಡು

ಒಲುಮೆ ಸಿರಿಯಾ ಕಂಡು
ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ
ಬಾಳು ರಂಗಾಗಿದೆ |೨|
ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಮಾತಾಡದೆ..ಬಳಿಬಾರದೆ..
ಮಾತಾಡದೆ..ಬಳಿಬಾರದೆ..
ನನ್ನಿಂದ ನೀ ದೂರ ಹೋದೆ
ಒಲುಮೆ ಸಿರಿಯಾ ಕಂಡು
ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ
ಬಾಳು ರಂಗಾಗಿದೆ
ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೆ
ಒಂದಾಗಿ ಹಾಡಿದ ರಾಗದ ದಾಟಿಯು ನೆನಪಾಗದೆ
ಬೇರಾಗದೆ ದೂರಾಗದೆ
ಬೇರಾಗದೆ ದೂರಾಗದೆ…ನನ್ನನ್ನು ನೀ ಸೇರು ಇಂದೆ
ಒಲುಮೆ ಸಿರಿಯಾ ಕಂಡು
ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ
ಬಾಳು ರಂಗಾಗಿದೆ.