kadali_karjura

ಇಂದಿನ ಮೌಲಿಕ ಕನ್ನಡ ಸಾರಸ್ವತ ಲೋಕದಲ್ಲಿ ಡಾ|| ದೊಡ್ಡರಂಗೇಗೌಡರು ಮೇರು ಸದೃಶ ವ್ಯಕ್ತಿ. ಮಾತ್ರವಲ್ಲ ಶಕ್ತಿಯೂ ಹೌದು. ಶ್ರೀಯುತರು ಬಹುಶ್ರುತರಾಗಿದ್ದು ವಿದ್ಯೆ – ವಿನಯಗಳು ಅವರ ಜೀವನದಲ್ಲಿ ಹಾಸು ಹೊಕ್ಕಾಗಿ ಹೆಣೆದುಕೊಂಡಿವೆ.
ಅವರ ಬದುಕು – ಬರಹಗಳಲ್ಲಿ ಆಡಂಬರವಿಲ್ಲದ ಗ್ರಾಮೀಣ ಸೊಗಡು, ಮುಂಗಾರು ಮಳೆಗೆ ಘಮ್ಮೆಂದು ಹೊಮ್ಮುವ ನೆಲದ ವಾಸನೆ, ಜಾನಪದೀಯ ಶೈಲಿಯಲ್ಲಿ ಕವಿತೆಗಳನ್ನು ಕಟ್ಟಿಕೊಡುವ ಕೌಶಲ್ಯ ಗಟ್ಟಗೊಂಡಿದೆ.
ಅವರದು ಭೂಮಿ ತೂಕದ ಹಿಮಾಲಯ ಸದೃಶ ವ್ಯಕ್ತಿತ್ವ. ಬಹುಮುಖವಾದ ಪ್ರತಿಭೆ. ಶ್ರೀಯುತರ ನಡೆ – ನುಡಿಗಳಲ್ಲಿ, ಬದುಕು ಬರಹಗಳಲ್ಲಿ ಇಬ್ಬಂದಿತನವೆಂಬುದಿಲ್ಲ. ಎಂದಿಗೂ ಅವರು ಪಲಾಯನವಾದಿ ಎನಿಸಿಕೊಂಡವರಲ್ಲ. ಅವರಿವರ ನೋವು – ನಲಿವುಗಳಿಗೆ ಸಹಜವಾಗಿ ಸ್ಪಂದಿಸುತ್ತಾ ಜಾತಿ – ಮತ – ಪಂಥಗಳ ಉಪಾಧಿಯಿಂದ ಗಾವುದ ದೂರ ಸರಿದ ಮಾನವತಾವಾದಿ; ಸಮಾಜಮುಖಿ.

– ಸಿ ಜಯಣ್ಣ