kavya_kalyaniಕಾವ್ಯ ಕಲ್ಯಾಣಿ : ನಿತ್ಯ ಕಾಯಕದಿ, ಕನ್ನಡ ಮಣ್ಣ ಸೊಗಡಿನ ಸಾರವನು ಸಾಹಿತ್ಯದಿ ಸಾಲುಗಟ್ಟಿ, ಭಾಮಯವಾಗಿ ಗೀತೆಯಾಗಿಸಿದ ಕೌಶಲದ ಕುಶಲ ಸಾಹಿತ್ಯ ಶಿಲ್ಪಿ, ಕವಿ ಡಾ. ದೊಡ್ಡರಂಗೇಗೌಡರು. ನಾಡಿನ ಬಹುದೊಡ್ಡ ಸಾಹಿತ್ಯದ ಹೆಮ್ಮರ. ಹೆಸರೇ ಮನಕ್ಕೆ ಚೇತನವನ್ನು ತುಂಬುವಂಥದ್ದು. ಬೆಳುದಿಂಗಳ ತಂಪಲ್ಲಿ ನೆನೆಯುವ ವ್ಯಕ್ತಿತ್ವದ ಸಾಕಾರ ಮೂರ್ತಿ. ಸಾಹಿತ್ಯಾಸಕ್ತ ಅಭಿಮಾನಿಗಳ ಹೃನ್ಮನದಿ ವಿರಾಜಮಾನರು. ಚಲನಚಿತ್ರ ಗೀತೆಗಳಲಿ ಕೇಳುಗನೆದೆಯ ಅಭಿಮಾನದ ಉತ್ತುಂಗದಿ, ಜಾನಪದದ ಹಳ್ಳಿಗನ ನೈಜ ಬದುಕ ಬೆವರ ಹನಿಹನಿಗೆ ಜೇನ್ನುಡಿಯಲಿ ಗೀತೆಯನು ನಮಗಿತ್ತವರು. ಎಂದೂ ಬಿಗುಮಾನ ಬಿಮ್ಮಲಿ ಎದೆ ಏರಿಸಿ ಇನ್ನೊಬ್ಬರ ಹಳಿದವರಲ್ಲ. ಕಿರಿಯರ ದಾರಿಗೆ ಬೆಳಕನಿಡಿವ ಸಿರಿ ಹಣತೆಯ ಗುರುವಿನಂತೆ, ಗರಿಬಿಚ್ಚಿ ಹಾರ ಬಯಸುವ ಹಕ್ಕಿಗಳಿಗೆ ವಿಶಾಲ ಬಾನ ತೋರಿ ಹಾರೆನ್ನುವ ಹಿರಿಯ ಮನದವರು…

ವಿಶಾಲ ರೆಂಬೆ ಕೊಂಬೆಗಳಲಿ ಗೂಡು – ಜೋಗುಳದ ಹಾಡು
ವಿಹಾರಕ್ಕೆ ನೆರಳು, ಹಣ್ಣು, ತಂಗಾಳಿಯಲಿ ಚಿಲಿಪಿಲಿ ಹಾಡು
ಜೀಕಲು ಜೋಕಾಲಿ, ಹಕ್ಕಿಪಕ್ಕಿಗಳಿಗಹೆ ಆಶ್ರಯದ ತವರು ಗೂಡು
ಅವರುಇವರುಅನ್ಯರೆನದೆತನ್ನವರೆಂದುತಬ್ಬಿಕೊಳ್ಳುವಪಾಡು

ಕನ್ನಡದ ನೆಲೆ, ಜಲ, ಜನರ ಹೃದಯ ಹಾಡು ಹಗಲ ಹರಿಕಾರ… ಡಾ. ದೊಡ್ಡರಂಗೇಗೌಡರ ಪ್ರೀತಿಗೆ ಮಣಿದು ಗೌರವ ಪುನೀತತೆಯ ಧನ್ಯತೆಯಲಿ ಈ ಎದೆಯ ನುಡಿಯ ಅಡಿಗಿಟ್ಟಿರುವೆ.

– – ಬಾಗೂರು ಮಾರ್ಕಂಡೇಯ