1. ರಾಜ್ಯದ ವಿವಿಧ ಜಿಲ್ಲೆಗಳ ಜನತೆ ಇವರು ನಾಡು ನುಡಿಗಾಗಿ ಸಲ್ಲಿಸಿದ ಸೇವೆಗಾಗಿ 1972 ರಿಂದಲೂ ಪುರಸ್ಕರಿಸುತ್ತಾ ಬಂದಿದ್ದಾರೆ. ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಕವಿಗೆ ಸೂಕ್ತ ಬಿರುದುಗಳನ್ನಿತ್ತು ಗೌರವಿಸಿವೆ.

2. 1972 ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಯಿಂದ ಗೌಡರ ಕವನ ಸಂಕಲನ ಕಣ್ಣು ನಾಲಗೆ ಕಡಲು ಕಾವ್ಯ ಕೃತಿಗೆ ಬಹುಮಾನ ಬಂದಿದೆ.

3. 1982 ರಲ್ಲಿ ಅಖಿಲ ಕರ್ನಾಟಕ ಚಲನಚಿತ್ರ ರಸಿಕರ ಸಂಘ ದಿಂದ ಅರುಣರಾಗ ಚಿತ್ರಕ್ಕಾಗಿ ಗೌಡರು ಬರೆದ ವರ್ಷದ ಶ್ರೇಷ್ಠ ಸಾಹಿತ್ಯಕ ಗೀತೆ “ನಾನೊಂದು ತೀರ… ನೀನೊಂದು ತೀರ…” ಕ್ಕೆ ಅತ್ಯುತ್ತಮ ಸಾಹಿತ್ಯವೆಂದು ಪರಿಗಣಿತವಾಗಿ ಪುರಸ್ಕಾರ ದೊರೆತಿದೆ.

4. 1990 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ನಿಂದ ಇವರ ಕಾವ್ಯಕೃತಿ (ಪ್ರಗಾಥ ವಿಭಾದ) ಪ್ರೀತಿ ಪ್ರಗಾಥಕ್ಕೆ ವರ್ಷದ ಅಭಿಜಾತ ಕಾವ್ಯ ಎಂದು ವಿಮರ್ಶಕರ ಮೆಚ್ಚುಗೆ ಪಡೆದು – “ರತ್ನಾಕರವರ್ಣಿ – ಮುದ್ದಣ ಕಾವ್ಯ ಪ್ರಶಸ್ತಿ” ಬಹುಮಾನ ಬಂದಿದೆ.

5. 1999 ರಲ್ಲಿ ಆರ್ಯಭಟ ಸಂಸ್ಥೆಯಿಂದ ಗೌಡರ ಭಕ್ತಿಗೀತೆ ಧ್ವನಿಸುರುಳಿ ಜಯ ಎನ್ನಿ ಭೈರವಗೆ ಕ್ಯಾಸೆಟ್ಗಾಗಿ ಆರ್ಯಭಟ ಪ್ರಶಸ್ತಿ ಬಂದಿರುತ್ತದೆ.

6. ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಹಾಕವಿ ಕುವೆಂಪು ಅವರ ಘನ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಗೌಡರು ಕವಿತಾ ವಾಚನ ಮತ್ತು ಗಾಯನ ಮಾಡಿದ್ದರು.

7. ಹಾಗೂ ಕುವೆಂಪು ಗೆಳೆಯರ ಬಳಗದಿಂದ ವಿಶ್ವ ಮಾನವ ಪ್ರಶಸ್ತಿಯನ್ನು ಮತ್ತು ಸುರ್ವೆ ಕಲ್ಚರ್ ಅಕಾಡೆಮಿ ಯವರಿಂದ ಸಾಹಿತ್ಯ ಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ.

8. ಗಾರ್ಡನ್ ಸಿಟಿ ಕಲ್ಚರಲ್ ಅಕಾಡೆಮಿ ಅವರಿಂದ ಸುವರ್ಣ ಕರ್ನಾಟಕ ರತ್ನ 2005 ಪ್ರಶಸ್ತಿಯನ್ನೂ ಪಡೆದಿರುತ್ತಾರೆ.