ಕನ್ನಡ ಇಂದು ತನ್ನ ಅನಂತ ಆಯಾಮಗಳನ್ನು ವಿಸ್ತರಿಸಿಕೊಂಡು ವಿಶ್ವಮುಖಿಯಾಗಿದೆ. ನಾವು ಮನಸ್ಸು ಮಾಡಿದರೆ ಎಲ್ಲ ವ್ಯವಹಾರಗಳನ್ನು ಕನ್ನಡದಲ್ಲೇ ನಡೆಸಲು ಖಂಡಿತಾ ಸಾಧ್ಯ. ಅಭಿಮಾನ ಮುಖ್ಯ. ಎಲ್ಲಿ ಕನ್ನಡದ ಅಕ್ಕರೆ ಇರುತ್ತದೋ ಅಲ್ಲಿ ಕನ್ನಡದ ಮುನ್ನಡೆಯೂ ಸಾಧ್ಯವಾಗುತ್ತದೆ.
ಜನಮುಖಿಯಾದ ಕನ್ನಡ ಶಾಸ್ತ್ರಮುಖಿಯಾಗಿ, ಜ್ಞಾನಮುಖಿಯಾಗಿ, ಕಲಾಮುಖಿಯಾಗಿ, ಸಮಾಜಮುಖಿಯಾಗಿ ನಮ್ಮ ನಾಡಿನ ಅಂತರಂಗದಲ್ಲಿ…. ಕನ್ನಡಿಗರ ಹೃನ್ಮನಗಳಲ್ಲಿ ಬೆರೆತು ಹೋಗಿದೆ. ಇಂದು ನಮಗೆ ಸಂಕಲ್ಪ ಬಲ ಬೇಕಾಗಿದೆ.
ಜಾಗತೀಕರಣ ವಿಷಮ ಸಂದರ್ಭದಲ್ಲಿ ನಮ್ಮ ನಲ್ಮೆಯ ಕನ್ನಡ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಂಪನ್ನತೆಯನ್ನು ಪಡೆದಿದೆ. ಕನ್ನಡಿಗರಲ್ಲಿ ನೆಚ್ಚು, ಕೆಚ್ಚು, ಪ್ರೀತಿ, ಆತ್ಮ ವಿಶ್ವಾಸ ತುಂಬಿ ತುಳುಕಿದಾಗಲೇ ಕನ್ನಡ ಜಗದಗಲ, ಮುಗಿಲಗಲ ವ್ಯಾಪಿಸಿ ವಿಶ್ವಮಾನ್ಯವಾಗುವುದು. ಅಂಥ ದೃಢ ನಿಲುವನ್ನು ಕನ್ನಡಿಗರು ಎಂದೆಂದೂ ಪ್ರಕಟಿಸುವ ಅಗತ್ಯವಿದೆ. ಆ ದಿಸೆಯಲ್ಲಿ ನಮ್ಮ ಪ್ರೀತಿ ಕನ್ನಡ ನಿಮಗೆ ಚಿರಂತನ ಸ್ಫೂರ್ತಿಯನ್ನು ನೀಡಬಲ್ಲುದು.
– ಡಾ. ದೊಡ್ಡರಂಗೇಗೌಡ
Leave a Reply
You must be logged in to post a comment.